Saturday, March 3, 2012

ತಿರಸ್ಕಾರ?

ನಾವು ಯಾರನ್ನೋ ತುಂಬಾ ಪ್ರೀತಿ ಮಾಡ್ತೀವಿ ಆದ್ರೆ ಅದರ ಅರಿವು ಅವರಿಗೆ ಆಗುವುದಿಲ್ಲ. ಆ ಅರಿವು ಆಗಲೇಬೇಕು ಅನ್ನೋದು ನಮ್ಮ ಅಪೇಕ್ಷೆ ಆಗಿರುತ್ತೆ, ಆದ್ರೆ ಅಪೇಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದೇ ಇರಬಹುದು. ಆಗ ಸ್ವಲ್ಪ ಮನಸ್ಸಿಗೆ ಬೇಸರ ಆಗುತ್ತೆ. ಆದ್ರೆ ಈ ಮನಸ್ಸು ಅನ್ನೋದು ನಾಚಿಕೆಗೇಡಿ ಅದಕ್ಕೆ ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದರು ಮಾಡಿದ ತಪ್ಪನ್ನೆ ಮತ್ತೆ ಮತ್ತೆ ಮತ್ತೆ ಮಾಡುತ್ತೆ. ಒಲವಿನ ಬೆಲೆ ಗೊತ್ತಿಲ್ಲದ ಕಲ್ಲು ಮನಸ್ಸಿನ ಜನರಿಂದ ಸಿಗುವ ತಿರಸ್ಕಾರಕ್ಕೆ ಮನಸ್ಸು ಪಾತ್ರವಾಗುತ್ತೆ. ಹಾಗಾದ್ರೆ ಪ್ರೀತ್ಸೋದೆ ತಪ್ಪ? ಖಂಡಿತ ಇಲ್ಲ, ಪ್ರೀತ್ಸೋದು ನಿಮ್ಮ ಇಷ್ಟ ಹೇಗೋ ಹಾಗೇನೆ ನಿಮಗೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡೋದು ಅವರ ಇಷ್ಟ. ನಿಜವಾದ ಪ್ರೀತಿ ಯಾವುದೇ ಷರತ್ತುಗಳನ್ನುಇಟ್ಟುಕೊಳ್ಳುವುದಿಲ್ಲ. ಪ್ರೀತಿಸೋ ಮನಸ್ಸಿಗೆ ತಿರಸ್ಕಾರಗಳು ಒದಗಿ ಬಂದಾಗ ಅದು ಕುಗ್ಗಿ ಹೋಗುತ್ತದೆ. ನಮಗೇ ಗೊತ್ತಿಲ್ಲದ ಯಾವುದೊ ಮೌನ ನಮ್ಮನ್ನ ಆವರಿಸುತ್ತದೆ. ಇಂಥ ಪರಿಸ್ಥಿಗಳಲ್ಲಿ, ನಮಗೆ ನಾವು ಸಮಾಧಾನ ಮಾಡಿಕೊಂಡಷ್ಟು, ಬೇರೆ ಯಾರು ಬಹುಶಃ ಮಾಡಲು ಆಗೋದಿಲ್ಲ.
ಮನಸ್ಸಿಗೆ ಬೇಸರವಾದಾಗ ನಾನು ಯಾರಿಗೂ ಬೇಡವಾದೆ ಅನ್ನೋ ವಿಚಿತ್ರ ಕಲ್ಪನೆ ಬರೋದು ಸಹಜ. ಇಂತಹ ಸಮಯದಲ್ಲಿ, ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿ, ಬೇರೆ ಕಡೆ ವಿಚಾರಗಳು ಹರಿಯುವಂತೆ ಮಾಡಿದ್ರೆ, ತಿರಸ್ಕ್ರತನಾದೆ ಅನ್ನೋ ಭಾವನೆಗೆ ಸ್ವಲ್ಪ ವಿಶ್ರಾಂತಿ ಸಿಗಬಹುದು. ಈ ತಿರಸ್ಕೃತ ಭಾವನೆ ನಿಮ್ಮ ಯಶಸ್ಸಿನ ಕತ್ತು ಹಿಸುಕುವ ಸಾಧ್ಯತೆಗಳೇ ಹೆಚ್ಚು. ಆದ್ರೆ ಅದೇ ಯಶಸ್ಸು, ತಿರಸ್ಕಾರವನ್ನು ಪುರಸ್ಕಾರವನ್ನಾಗಿಸುವ ಶಕ್ತಿ ಹೊಂದಿದೆ. ನಿಮ್ಮ ಬಗ್ಗೆ ನಿಮಗೆ ಒಲವು ಇದ್ದರೆ ಸಾಕು, ಬೇರೆಯವರ ತಿರಸ್ಕಾರ ಅವರ ಬಾಲಿಶತನ ಅಂತ ತಿಳಿದು ನಕ್ಕು ಸುಮ್ಮನಾಗಿ. ನೀವು ಪ್ರೀತಿಸ್ತಾನೆ ಇರಿ...

ಮತ್ತೆ ಸಿಗ್ತೇನೆ.... 

1 comment:

  1. ri!!!! yen helodo e post ge gothagthila
    adi ilde antya ilde yella vishyanu helthu ansthide!

    ReplyDelete