ಪಕ್ಕದ ಮನೆ ಶ್ರೀಪದರಾಯರದು ಮತ್ತು ಅವರ ಹೆಂಡತಿ ಸರೋಜಮ್ಮನವರದು ಅನ್ಯೋನ್ಯ ಸಂಸಾರ. ಹೆಂಡತಿ ಗಂಡನಿಗೆ ಊಟ ಹಾಕದೇ ತಾವು ತಿನ್ನುವುದಿಲ್ಲ , ಹಾಗೇನೆ ಶ್ರೀಪಾದರಾಯರು ಕೂಡ.
ಹೆಂಡತಿಗೆ ತುತ್ತು ಹಾಕದೆ ತಾವು ಊಟ ಮಾಡುವುದಿಲ್ಲ. ಎಲ್ಲ ಯುವ ಪೀಳಿಗೆಗೂ ಇವರ ದಾಂಪತ್ಯ
ಉದಾಹರಣೆ. ಇವರೂ ಕೂಡ ಆಗಾಗ್ಗೆ ಜಗಳವಾಡುತ್ತಾರೆ. ಆದರೆ ರಾಯರೇ ಕೊನೆಗೆ ಸೋಲು
ಒಪ್ಪಿಕೊಳ್ಳುವುದು. ಎಂದಿನಂತೆ ಇವತ್ತು ಕೂಡ ರಾಯರೇ ಹೆಂಡತಿಗೆ ಊಟ ಮಾಡಿಸುತ್ತಿದ್ದಾರೆ. ಹಿಂದೆ ಬಂದು ನಿಂತ ರಾಮಣ್ಣ (ರಾಯರ ಮನೆ ಆಳು), ಅಪ್ಪೋರೆ ಮನೆಗೆ ಹೋಗೋಣ ನಡಿಯಿರಿ". ರಾಯರ ಕಣ್ಣಲ್ಲಿ ಹೆಂಡತಿಯನ್ನು ಬಿಟ್ಟು ಹೋಗಬೇಕಲ್ಲ ಅನ್ನೋ ಬೇಸರದ ಕಣ್ಣೀರು. "ಸರಿ, ನಾಳೆ ಮತ್ತೆ ಬರುತ್ತೇನೆ" ಎನ್ನುತ್ತಾ ಸ್ಮಶಾನದಿಂದ ಹೊರನಡೆದರು. ಹೌದು ಸರೋಜಮ್ಮ ತೀರಿಕೊಂಡು ೨೦ ವರ್ಷಗಳಾಗಿವೆ !!!!!!.
ಹೆಂಡತಿಗೆ ತುತ್ತು ಹಾಕದೆ ತಾವು ಊಟ ಮಾಡುವುದಿಲ್ಲ. ಎಲ್ಲ ಯುವ ಪೀಳಿಗೆಗೂ ಇವರ ದಾಂಪತ್ಯ
ಉದಾಹರಣೆ. ಇವರೂ ಕೂಡ ಆಗಾಗ್ಗೆ ಜಗಳವಾಡುತ್ತಾರೆ. ಆದರೆ ರಾಯರೇ ಕೊನೆಗೆ ಸೋಲು
ಒಪ್ಪಿಕೊಳ್ಳುವುದು. ಎಂದಿನಂತೆ ಇವತ್ತು ಕೂಡ ರಾಯರೇ ಹೆಂಡತಿಗೆ ಊಟ ಮಾಡಿಸುತ್ತಿದ್ದಾರೆ. ಹಿಂದೆ ಬಂದು ನಿಂತ ರಾಮಣ್ಣ (ರಾಯರ ಮನೆ ಆಳು), ಅಪ್ಪೋರೆ ಮನೆಗೆ ಹೋಗೋಣ ನಡಿಯಿರಿ". ರಾಯರ ಕಣ್ಣಲ್ಲಿ ಹೆಂಡತಿಯನ್ನು ಬಿಟ್ಟು ಹೋಗಬೇಕಲ್ಲ ಅನ್ನೋ ಬೇಸರದ ಕಣ್ಣೀರು. "ಸರಿ, ನಾಳೆ ಮತ್ತೆ ಬರುತ್ತೇನೆ" ಎನ್ನುತ್ತಾ ಸ್ಮಶಾನದಿಂದ ಹೊರನಡೆದರು. ಹೌದು ಸರೋಜಮ್ಮ ತೀರಿಕೊಂಡು ೨೦ ವರ್ಷಗಳಾಗಿವೆ !!!!!!.
gurugale super agide...nange tumba ista aitu idu
ReplyDelete