Saturday, October 8, 2011

ಔಟ್ ಆಫ್ ಕವರೇಜ್ ಏರಿಯ....

ರಘು ಮತ್ತು ಪ್ರಭು ಬಾಲ್ಯ ಸ್ನೇಹಿತರು. ಯಾವುದೋ ಒಂದು ಕಹಿ ಘಳಿಗೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಆಗಿದೆ. ೩ ವರ್ಷದ ನಂತರ ಕೂಡ ಅದು ಬಗೆಹರಿದಿಲ್ಲ. ಪ್ರಭು ಆಗಾಗ ಫೋನ್ ಮಾಡಲು ಪ್ರಯತ್ನಿಸಿ ನೋಡಿದ್ದಾನೆ. ರಘು ಮಾತ್ರ ಅವನ ಯಾವ ಕರೆಗಳಿಗೂ ಉತ್ತರ ಕೊಟ್ಟಿಲ್ಲ. ಪ್ರಭು ಮತ್ತೆ ಫೋನ್ ಮಾಡಿದ್ದಾನೆ, ಎಂದಿನಂತೆ ರಘು ಉತ್ತರಿಸಿಲ್ಲ. ಕೊನೆಗೆ ಒಂದು ದಿನ ಪ್ರಭು ಫೋನ್ ಬರುವುದು ನಿಂತು ಹೋಗಿದೆ. ಕಾಶಿ ರಘು ಮತ್ತು ಪ್ರಭು ಇವರ ಗೆಳೆಯ, ಅಮೆರಿಕದಿಂದ ಬಂದು ರಘು ಮನೆಗೆ ಹೋಗುತ್ತಾನೆ. ಸ್ನೇಹಿತನನ್ನು ಅಚಾನಕ್ಕಾಗಿ ನೋಡಿದ ರಘು
ರಘು : "ಏನಪ್ಪಾ ಈ ಧಿಡೀರ್ ದರ್ಶನ ?".
ಕಾಶಿ : ಪ್ರಭು ವಿಷಯ ತಿಳೀತು ಅದಕ್ಕೆ ಬಂದೆ.
ರಘು : ಏನು ವಿಷಯ ?
ಕಾಶಿ : ಪ್ರಭು ನಮ್ಮನ್ನ ಅಗಲಿ ೩ ದಿನ ಆಯಿತು.

ರಘು ಮನಸ್ಸಿಗೆ ತುಂಬಾ ಬೇಸರ. ನನ್ನ ಜೊತೆ ಮಾತಾಡಲು ಹಾತೊರೆಯುತ್ತಿದ್ದ ನನ್ನ ಸ್ನೇಹಿತನಿಗೆ ಅವನ ಕೊನೆಗಾಲದಲ್ಲೂ ಮಾತಾಡಿಸುವ ಸೌಜನ್ಯ ನಾನು ತೋರಲಿಲ್ಲ. ಇದಾದ ನಂತರ ಪ್ರಭು ಮೊಬೈಲ್ ಗೆ ದಿನಾಲು ರಘು ಫೋನ್ ಮಾಡ್ತಾನೆ, ಆದ್ರೆ ಪ್ರಭು ಉತ್ತರ ಮಾತ್ರ "ಔಟ್ ಆಫ್ ಕವರೇಜ್ ಏರಿಯ....".

No comments:

Post a Comment