Thursday, October 6, 2011

ಸುಖದ ಸಂಪತ್ತು.





ಮನು ಮತ್ತು ಕೀರ್ತಿ ನಡುವೆ ವಾಗ್ವಾದ ನಡೀತಾ ಇದೆ. ಇದೇನು ಹೊಸ ವಿಷಯ ಅಲ್ಲ. ಕೀರ್ತಿಗೆ ಒಳ್ಳೆ ಹೆಸರು, ದುಡ್ಡು ಮತ್ತು ಅಂತಸ್ತು ಗಳಿಸಬೇಕು ಅನ್ನೋ ಆಸೆ, ಅದಕ್ಕೆ ಮನು ಪೂರ್ತಿ ಸಮ್ಮತಿ ಸೂಚಿಸಿ ಆದಷ್ಟು ಅವಳಿಗೆ ಸಹಾಯ ಮಾಡುತ್ತಾನೆ. ಆದರೆ ಇವತ್ತಿನ ಜಗಳದ ವಿಷಯ ಸ್ವಲ್ಪ ಗಂಭೀರ. ಅವಳಿಗೆ ಕೇವಲ ತನ್ನ ವೃತ್ತಿ ಬದುಕಿನ ಕನಸುಗಳು ಮತ್ತು ಐಶಾರಮಿ ಮಾತ್ರ ಮುಖ್ಯ, ಅದಕ್ಕೋಸ್ಕರ ಚಿಕ್ಕಚಿಕ್ಕ ಆಸೆಗಳ ಮತ್ತು ಭಾವನೆಗಳ ಬಲಿ ಕೊಡಲು ಅವಳು ಸಿದ್ಧ. ಅವಳ ಇಚ್ಚೆಯಂತೆ ಮನುವನ್ನು ಬಿಟ್ಟು ದೆಹಲಿಗೆ ಹೋಗುವುದಾಗಿ ನಿರ್ಧರಿಸಿದಳು. ಹೋಗುವ ಮುನ್ನ ಮನುವನ್ನು ಕರೆದು "ನಾನು ಬಂದ ಮೇಲೆ ಮತ್ತೆ ನಮ್ಮ ಸುಖೀ ಜೀವನವನ್ನು ಮುಂದುವರೆಸೋಣ" ಅಂತ ಹೇಳಿ ಹೊರಟೆ ಹೋದಳು. ಮನನೊಂದ ಮನು ವಿಧಿಯಿಲ್ಲದೇ ಒಪ್ಪಿಕೊಂಡನು.......
...........೨ ವರ್ಷದ ನಂತರ .....................................
ಇವತ್ತು ಕೀರ್ತಿ ಮರಳಿ ಬರುವ ದಿನ. ಮನು ಸಡಗರದಿಂದ ಮನೆಯನ್ನೆಲ್ಲ ಸಿಂಗರಿಸಿದ್ದಾನೆ. ಅವಳಿಗೆ ಇಷ್ಟ ಅಂತ ಜಾಮೂನು ತರಲು ಅಂಗಡಿಗೆ ಹೋಗಿದ್ದಾನೆ. ಅಷ್ಟರಲ್ಲಿ ಕೀರ್ತಿ ಫೋನ್ ಬರುತ್ತೆ. ನಾನು ಮನೆಗೆ ಬಂದು ತಲುಪಿದ್ದೀನಿ. ಖುಷಿಗೊಂಡ ಮನು ಜಾಮೂನು ಕಾರಿನಲ್ಲಿ ಇಟ್ಟುಕೊಂಡು ಅವಸರದಿಂದ ಹೊರಡುತ್ತಾನೆ. ೧೦ ನಿಮಿಷದ ನಂತರ ಮನು ಮನೆ ಸೇರಿದ್ದು ಹೆಣವಾಗಿ ಕಾರಣ ರಸ್ತೆ ಅಪಘಾತ. ಕೀರ್ತಿಗೆ ಆಘಾತ.
ಅತೀ ಪ್ರೀತಿಯಿಂದ ನೋಡಿಕೊಂಡಿದ್ದ ಪತಿಯನ್ನು ಕಳೆದುಕೊಂಡ ಕೀರ್ತಿಗೆ ಇವತ್ತು ಜೀವನದಲ್ಲಿ ಎಲ್ಲ ಸೌಕರ್ಯಗಳು ಸಿಕ್ಕಿವೆ. ಈಗ ಮನು ಹೇಳಿದ ಮಾತುಗಳು ಮಾತ್ರ ಅವಳೊಂದಿಗಿವೆ. "ಜೀವನದಲ್ಲಿ ಸುಖ ಎಂಬುದು ಕೇವಲ ದುಡ್ಡು ಕಾಸಿನಲ್ಲಿ ಇಲ್ಲ. ನಾಳೆ ನಾವು ಚೆನ್ನಾಗಿ ಇರ್ತೀವಿ ಅನ್ನೋ ಕನಸು ಕಾಣೋದು ಒಳ್ಳೇದು. ಆದರೆ ಆ ಕನಸಿನ ಕಾಲಿನಿಂದ ಇವತ್ತಿನ ಸಂತೋಷಗಳನ್ನು ಹೊಸಕುವುದು ಸರಿಯಲ್ಲ"

No comments:

Post a Comment