Sunday, November 6, 2011

ಯಾರ ಸಂತೋಷ?

ಮನುಷ್ಯನ ಜೀವನದಲ್ಲಿ ನೋವು-ನಲಿವು, ಸುಖ-ದು:ಖ, ಪ್ರೀತಿ-ದ್ವೇಷ, ಸಿರಿತನ-ಬಡತನ ಎಲ್ಲವೂ ಒಂದಿಲ್ಲ ಒಂದು ಸಂದರ್ಭದಲ್ಲಿ ಬಂದು ಒದಗುವುದು ಸಹಜ. ದು:ಖ, ನೋವು ತರುವ ಮೊದಲ ರೋಗವೇ ಮಾನಸಿಕ ಖಿನ್ನತೆ. ಈ ರೀತಿಯ ಖಿನ್ನತೆಯನ್ನು ಮೀರಿ ನಿಂತ ಕೆಲವರು ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ಅತ್ಯಂತ ಸಫಲ ಜೀವನವನ್ನು ನಡೆಸಿರುವ ಉದಾಹರಣೆಗಳು ಅನೇಕ. ಕೆಲವರು ಹೇಳುವ ಪ್ರಕಾರ, ಜೀವನದಲ್ಲಿ ನಾನು ಒಂಟಿಯಾಗಿ, ಏಕಾಂಗಿಯಾಗಿ ಬದುಕು ಸಾಗಿಸಿದೆ. "ನನಗೆ ನನ್ನವರು ಅಂತ ಯಾರು ಇಲ್ಲ. ಬರೀ ನೋವುಗಳನ್ನೇ ಅನುಭವಿಸಿದ ನನಗೆ ಜೀವನ ಬೇಸರವಾಗಿದೆ". ಇಂಥ ಮಾತುಗಳನ್ನು ಕೇಳಿದಾಗ ನನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿದವು. ಕೇವಲ ನಮಗೆ ಒದಗಿ ಬಂದ ಸಂತೋಷಗಳೇ ನಮ್ಮವಾ? ಹಾದಿಯಲ್ಲಿ ಹೋಗಬೇಕಾದ್ರೆ ಮಕ್ಕಳಿಲ್ಲದ ದಂಪತಿಗಳು, ರಸ್ತೆ ಪಕ್ಕದಲ್ಲಿ ಆಡುತ್ತಿದ್ದ ಮಕ್ಕಳನ್ನು ಕಂಡು, ತಮಗೆ ಮಕ್ಕಳಿಲ್ಲ ಅನ್ನೋ ನೋವನ್ನು ಮರೆತು, ಆ ಮಕ್ಕಳ ಮುಗ್ಧ ಮುಖಗಳನ್ನು ನೋಡಿ ಸಂತೋಷಪದಬಾರದೇಕೆ. ಸಮಾಜದಲ್ಲಿ ನಮಗಿಂತ ನೋವಿನಲ್ಲಿರುವವರು ಇದ್ದಾರೆ, ಹಾಗಾದರೆ ಅವರೆಲ್ಲ ಜೀವನದಲ್ಲಿ ಬೇಸರ ಮಾಡಿಕೊಂಡು ಆತ್ಮಹತ್ತೆಗೆ ಪ್ರಯತ್ನಿಸಬೇಕಾ? ಸ್ವಲ್ಪ ಯೋಚನೆ ಮಾಡಿ. ಜಗತ್ತಿನಲ್ಲಿ ಎಲ್ಲ ಕಡೆ ಸಂತೋಷ ದು:ಖ ತುಂಬಿದೆ. ಬೇರೆಯವರ ಸಂತೋಷ ನೋಡಿ, ಅದರಲ್ಲಿ ಅಡಗಿರುವ ಆನಂದವನ್ನು ನಾವೂ ಅನುಭವಿಸಿ, ಕಣ್ಣೀರು ತುಂಬಿದ ಕಣ್ಣಲ್ಲಿ ಉಲ್ಲಾಸ ತುಂಬಿ, ಇಳಿ ಬಿದ್ದಿರುವ ಮುಖದಲ್ಲಿ ಒಂದಿಷ್ಟು ನಗು ಮೂಡಿಸಿ. ನಿಮ್ಮ ನೋವನ್ನು ನಗೆಯಲ್ಲಿ ಪರಿವರ್ತಿಸಿ ಬದುಕುವ ಪ್ರಯತ್ನ ಮಾಡಬಾರದೇಕೆ?

 

No comments:

Post a Comment