Tuesday, November 1, 2011

ಮರಣೋತ್ತರ ಪ್ರೀತಿ....

ಮೊನ್ನೆವರೆಗೂ ಮಿತ್ರನನ್ನೊಬ್ಬನನ್ನು ಬೈಕೊಂಡು ಓಡಾಡುತ್ತಿದ್ದ ಶಂಕರ್ ಇವತ್ತು 
ಅದೇ ವ್ಯಕ್ತಿ ಸತ್ತ ನಂತರ ಅವನ ಮನೆಗೆ ಹೋಗಿ ಸಾಂತ್ವನ ಹೇಳಿ, ಆ ವ್ಯಕ್ತಿಯ ಹಿರಿಮೆ ಮತ್ತು ದೊಡ್ದತನಗಳನ್ನು ಹೊಗಳಿದ.  ಈ ಸನ್ನಿವೇಶ ನೋಡಿ ನನ್ನಲ್ಲಿ 
ಉದ್ಭವಿಸಿದ ಕೆಲವು ಪ್ರಶ್ನೆಗಳಿಗೆ ಮತ್ತು ಯೋಚನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಸಾಮಾನ್ಯವಾಗಿ ಎಲ್ಲರೂ ಮಾಡುವುದೇ ಹೀಗೆ ಅನ್ನಿಸುತ್ತೆ. ಯಾವ ಮನುಷ್ಯ ಬದುಕಿರುವಾಗ ಅವನ ಜೊತೆ ದ್ವೇಷ, ಕೋಪ, ಹೊಡೆದಾಟ ಮತ್ತು ನೋವು ಕೊಡುವ ಹಲವು ಪ್ರಯತ್ನಗಳನ್ನು ಮಾಡುತ್ತೇವೋ, ಅದೇ ವ್ಯಕ್ತಿ ಸತ್ತಾದ ಮೇಲೆ ಅವನ ಬಗ್ಗೆ ಒಳ್ಳೆ ಮತುಗಳನನದುತ್ತೇವೆ. ಹೀಗೇಕೆ? ಇನ್ನು ಕೆಲವರು ಒಬ್ಬ ವ್ಯಕ್ತಿ ಸತ್ತ ಮೇಲು ಅವನ ಬಗ್ಗೆ ಕೆಟ್ಟ ಮಾತುಗಳನ್ನು ಆಡುತ್ತಾರೆ, ಅವರ ವಿಷಯ ಬಿಟ್ಟು ಬಿಡಿ. ನಾನು ಮಾತನಾಡುತ್ತಿರುವುದು ಮನಸ್ಸಿನ ಆಳದಲ್ಲಿ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದರು ಕೂಡ, ಅಹಂ ಎಂಬ ಹುಚ್ಚು ಕುದುರೆಯನ್ನೇರಿ ಸ್ನೇಹ ಮತ್ತು ಸಂಬಂಧಗಳನ್ನು 
ಲೆಕ್ಕಿಸದೇ ಜೀವನ ಪೂರ್ತಿ ಛಲ, ಸಿಟ್ಟು ಮತ್ತು ಮಾತ್ಸರ್ಯಗಳಿಂದ ಇನ್ನೊಬ್ಬ ವ್ಯಕ್ತಿಗೆ ನೋವು ಕೊಡುವ ಪ್ರಯತ್ನಗಳು 
ನಡೆಯುತ್ತಿರುತ್ತವೆ. ಅದೇ ವ್ಯಕ್ತಿ ಸತ್ತ ತಕ್ಷಣ ಛಲ, ಸಿಟ್ಟು ಮತ್ತು ದ್ವೇಷ ಮಾಯವಾಗಿ ಸ್ನೇಹದ ಸೆಲೆ ಮತ್ತೆ ಜಿನುಗಲಾರ೦ಭಿಸುತ್ತದೆ. ಎಂತಹ ವಿಪರ್ಯಾಸ!!! ವ್ಯಕ್ತಿಯು ಸತ್ತ ಮೇಲೆ ಅವನಿಗೆ ತೋರಿಸುವ ಪ್ರೀತಿ, ಅವನು 
ಬದುಕಿದ್ದಾಗ ತೋರಿಸಿದ್ದಾರೆ ಈ ಜಗಳ ಹೊಡೆದಾಟ ತಾಪತ್ರಯಗಳು ಇರುತ್ತಿರಲಿಲ್ಲವೇನೋ. ಅದಕ್ಕೆ ಕವಿ ಹೇಳಿರಬಹುದು 


                                   "ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ, 
                                     ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಬದುಕಿನಲಿ".
ಈಗ ನೀವೂ ಯೋಚಿಸಿ....

No comments:

Post a Comment